Posts

Showing posts from November, 2016

ಸಿದ್ದಿ… ಸಿದ್ದಮ್ಮ… ಸಿದ್ದವ್ವ! ಕೆಲವು ನೆನಪುಗಳು

ಸಿದ್ದಿ… ಸಿದ್ದಮ್ಮ… ಸಿದ್ದವ್ವ ! ಕೆ ಲವು ನೆನಪುಗಳು ನಾನು ಹುಟ್ಟಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ವರ್ಷ ಹನ್ನೊಂದು ದಿನಗಳಿಗೆ ... ಕರ್ನಾಟಕದ ಮೂಲೆಯೊಂದರ ಹಳ್ಳಿಯಲ್ಲಿ… ಅದರ ಹೆಸರು ಹೊಸಹಳ್ಳಿ ... ಜಂಗಮರ ಹೊಸಹಳ್ಳಿ ಎಂದೂ ಕರೆಯುತ್ತಾರೆ . ನನಗೀಗ ಅತ್ತಿರತ್ತಿರ ಅರವತ್ನಾಲ್ಕು ವರ್ಷಗಳು . ಅಗಾಗ್ಗೆ ಹಲವು ಬಾಲ್ಯದ ನೆನಪುಗಳು ಕಣ್ಮುಂದೆ ಬರುತ್ತಿರುತ್ತವೆ . ಅವುಗಳೊಮ್ಮೊಮ್ಮೆ ಕನಸುಗಳಾಗಿ ಕಾಡುತ್ತಿರುತ್ತವೆ . ಅವುಗಳನ್ನು ದುಸ್ವಪ್ನಗಳು ಎನ್ನಲೂ ಆಗುವುದಿಲ್ಲ . ಹಲವಾರು ಬಾರಿ ಬಿದ್ದ ಕನಸುಗಳಲ್ಲಿ ಹೆಚ್ಚು ನಮ್ಮೂರಿನಲ್ಲಿ ಬದುಕುತ್ತಿದ್ದ ಹೊಲೆಯರ ಸಿದ್ದವ್ವನ ಬಗ್ಗೆಯಾಗಿದ್ದವು . ನನ್ನಮ್ಮನ ಅಪ್ಪ - ಅಮ್ಮನಿಗೆ ಆಗಿನ ಕಾಲಕ್ಕೆ ಮೂರೇ ಮಕ್ಕಳು , ಒಂದು ಗಂಡು ಎರಡು ಹೆಣ್ಣು . ಅದರಲ್ಲಿ ನನ್ನಮ್ಮನೇ ಹಿರಿಮಗಳು . ಹತ್ಹನ್ನೊಂದು ವರ್ಷದವಳಿದ್ದಾಗ ತನ್ನಮ್ಮನನ್ನು ಕಳೆದುಕೊಂಡಿದ್ದವಳು . ಬೆನ್ನಿಗೆ ಬಿದ್ದಿದ್ದ ತಮ್ಮ - ತಂಗಿಯನ್ನು ಸಾಕುವ ಹೊಣೆ ಆಕೆಯದಾಗಿತ್ತು . ಅಷ್ಟರ ವೇಳೆಗೆ ನನ್ನಜ್ಜನ ... ಅಮ್ಮನ ಅಪ್ಪ ... ಅಣ್ಣತಮ್ಮಂದಿರೆಲ್ಲಾ ಬೇರೆಯಾಗಿದ್ದು ಬೇರೆಬೇರೆ ಮನೆ ಮಾಡಿ ಸಂಸಾರ ಹೂಡಿದ್ದುದರಿಂದ ಈ ಮೂರು ಮಕ್ಕಳು ತಾಯಿಯಿಲ್ಲದ ತಬ್ಬಲಿಯಾಗಿದ್ದರು ... ಹಲವಾರು ಜನರ ಬುದ್ದಿ ಮಾತಿನಿಂದಾಗಿ ನನ್ನ ಹೆಣ್ಣಜ್ಜ ಎರಡನೆ ಮದುವೆಯಾಗುವ ಸಾಹಸಕ್ಕೆ ಹೋಗಿರಲಿಲ್ಲ . ಮನೆಯ ಅಡಿಗೆ ,

ಕನ್ನಡ ದೂರದರ್ಶಿ ವಾಹಿನಿಗಳ ಮಹಾ(ಮೆಗಾ) ಎಂಬ ಅಧಿಕಪ್ರಸಂಗೀ ಧಾರಾವಾಹಿಗಳು!?

18-10-1015 ರ ಮೈಸೂರಿನ " ಕನ್ನಡಿಗರ ಪ್ರಜಾನುಡಿ " ದಿನಪತ್ರಿಕೆಯ ' ಪ್ರಜಾ ಸಾಪ್ತಾಹಿಕ ' ಪುರವಣಿಯಲ್ಲಿ ಪ್ರಕಟವಾಗಿದ್ದ ಈ ಬರವಣಿಗೆಯನ್ನು ನನ್ನ ಬ್ಲಾಗೋದುಗರಿಗಾಗಿ ಸಣ್ಣ ಸೇರಿಕೆ ತಿದ್ದುಪಡಿಯೊಡನೆ ಇಲ್ಲಿ ಮರುಪ್ರಕಟಿಸುತ್ತಿದ್ದೇನೆ. ಕನ್ನಡ ದೂರದರ್ಶಿ ವಾಹಿನಿಗಳ ಮಹಾ ( ಮೆಗಾ ) ಎಂಬ ಅಧಿಕಪ್ರಸಂಗೀ ಧಾರಾವಾಹಿಗಳು !? ನನ್ನ ಪತ್ನಿ " ಕಲರ್ಸ್‌ ಕನ್ನಡ " ( ಹಳೆಯ " ಈಟಿವಿ ಕನ್ನಡ '') ಎಂಬ ಕನ್ನಡ ದೂರದರ್ಶಿ ವಾಹಿನಿಯಲ್ಲಿ ಬರುವ ಕೆಲವು ಧಾರಾವಾಹಿಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದುದರಿಂದ ಸಮಯ ಕಳೆಯಲೆಂದು ಜೊತೆಯಲ್ಲಿ ಕೂತು ನೋಡುವುದು ನನಗೂ ಸಹ ಅಭ್ಯಾಸವಾಗಿಬಿಟ್ಟಿತ್ತು . .! ಮುಖ್ಯವಾಗಿ ನೋಡುತ್ತಿದ್ದುದು ಕನ್ನಡದ ಮಹಾ ಬುದ್ಧಿವಂತ ನಿರ್ದೇಶಕನೆಂದು ನಾನು ನಂಬಿದ್ದ ಟಿ . ಎನ್‌ . ಸೀತಾರಾಮ್‌ ನಿರ್ದೇಶನದ ಧಾರಾವಾಹಿಗಳನ್ನು . ... " ಮಾಯಾಮೃಗ , ಜ್ವಾಲಾಮುಖಿ , ಮನ್ವಂತರ ...'' ಮೊದಮೊದಲಿನವು ನೋಡಲು ಬೇಸರವಾಗುತ್ತಿರಲಿಲ್ಲ . ಅವುಗಳು ಒಂದು ನಿರ್ಧಿಷ್ಟ ದಿಕ್ಕಿನಲ್ಲಿ ನಿರ್ಧಿಷ್ಟ ಗತಿಯಲ್ಲಿ ಚಲಿಸಿ ಮುಕ್ತಾಯವಾದಂಥ ಧಾರಾವಾಹಿಗಳು . ಆದರೆ ಆತ ಆನಂತರ ನಿರ್ದೇಶಿಸಿದ " ಮುಕ್ತ ; ಮುಕ್ತ ಮುಕ್ತ ಮತ್ತು ಮಹಾಪರ್ವ '' ಗಳೆಂಬ ಜಾಳು ಜಾಳಾಗಿ ನೇಯ್ದ ಹಳೆಯ ಬಟ್ಟೆಗಳಂತಹ ದಾರಾವಾಹಿಗಳು . "

ಚೇತನ್‌ ಭಗತ್‌ ನ ಕಾದಂಬರಿ "ರೆವಲ್ಯೂಷನ್‌ 2020”

ನಾನು ... ಚೇತನ್‌ ಭಗತ್‌ ಎಂಬ ಭಾರತೀಯ ಕಾದಂಬರಿಕಾರನ " ರೆವಲ್ಯೂಷನ್‌ 2020”, ಇಂಗ್ಲಿಷ್‌ ಕಾದಂರಿಯನ್ನು ಓದಿ ಮುಗಿಸಿದ ಮೇಲೆ ಆತನ ಕಾದಂರಿ ಕುರಿತು ನನಗನಿಸಿದ ಕೆಲವು ಮಾತುಗಳನ್ನು ಅತನ ಮಿಂಚಂಚೆಗೆ (email address) ಬರೆದು ರವಾನಿಸಿದ್ದೆ . ಅದನ್ನು ನನ್ನ ಬ್ಲಾಗೋದುಗರಿಗಾಗಿ ಇಲ್ಲಿ ಮರು ಪ್ರಕಟಿಸಿದ್ದೇನೆ . It is about Chetan Bhagath’s novel “Revolution 2020” I've just finished your - I said, He said and She/Arati said - novel, "Revolution 2020". It just reminded me the characters of Girish Karnad's play Hayavadana in Kannada. The central figure Padmini, the fickle minded wife of Devadatta (an intelligent Brahmin) desires to have a bodily relationship with Kapila, Devadatta's friend (a black macho personality). Critics expressed this way about Hayavadana - selfishness and sensuality find expression in her (Padmini), an insatiable desire for both brain and brawn, which are symbolized by Devadatta and Kapila respectively. Married to Devadatta, Padmini craves for the muscle and body of K

ಕನ್ನಡ ಗಣಕೀಕರಣದಲ್ಲಿ ಶಿಷ್ಟತೆ ಮತ್ತು ಏಕರೂಪತೆ: ಕಗಪ ಇಬ್ಬಗೆ ನೀತಿ

ಕನ್ನಡ ಗಣಕೀಕರಣದಲ್ಲಿ ಶಿಷ್ಟತೆ ಮತ್ತು ಏಕರೂಪತೆ : ಕಗಪ ಇಬ್ಬಗೆ ನೀತಿ ಕನ್ನಡ ಲಿಪಿ ಮತ್ತು ಕೀಲಿಮಣೆ ವಿನ್ಯಾಸಗಳಿಗಾಗಿ “ ಶಿಷ್ಟತೆ ಮತ್ತು ಏಕರೂಪತೆ ” ಎಂಬ ಶೀರ್ಷಿಕೆಯಡಿಯಲ್ಲಿ 2014 ಏಪ್ರಿಲ್‌ , 17 ರ ಗುರುವಾರದಂದು ಪ್ರಕಟಿಸಿದ ಜಾಲಪುಟವನ್ನು “ ನುಡಿ 5.0” ತಂತ್ರಾಂಶದ ಸಹಾಯ ಪರಿವಿಡಿಯ ವರದಿಗೆ ಜೋಡಿಸಿಡಲಾಗಿದೆ . ಇದನ್ನು ಪರಿಶೀಲಿಸಿದ ನಂತರ ಈ ಒಂದು ಅನಿಸಿಕೆಯನ್ನು ಈ ಬರಹದ ಮೂಲಕ ಕಗಪ ಮುಂದಿಡಬೇಕೆಂದೆನಿಸಿತು . 2014 ರ ಏಪ್ರಿಲ್‌ 8 ರಂದು ವಿಂಡೋಸ್‌ XP ಕಾರ್ಯಾಚರಣ ವ್ಯವಸ್ಥೆ ( ಕಾವ್ಯ ) ಗೆ ನೀಡುತ್ತಿದ್ದ ಬೆಂಬಲವನ್ನು ಮೈಕ್ರೊಸಾಫ್ಟ್‌ ಸಂಸ್ಥೆ ಹಿಂತೆಗೆದುಕೊಂಡು ಅದರ ಬಳಕೆದಾರರನ್ನು ನಡುನೀರಿನಲ್ಲಿ ಕೈಬಿಟ್ಟಿತು . ಪರಿಣಾಮವಾಗಿ ಈ ಲೇಖಕರು ಲಿನಕ್ಸ್‌ ನ “ ಓಪನ್‌ಸೂಸ ” ಕಾರ್ಯಾಚರಣ ವ್ಯವಸ್ಥೆ ( ಕಾವ್ಯ ) ಯನ್ನು ಅವರ ಗಣಕಕ್ಕೆ ಅಳವಡಿಸಿಕೊಂಡಿದ್ದಾಯಿತು . ಹಾಗಾಗಿ ನುಡಿ ಐಎಂಇ ( ಇನ್ಪುಟ್‌ ಮೆತಡ್‌ ಇಂಜಿನ್‌ ) ತಂತ್ರಾಂಶ ಗಣಕದ ವಿಂಡೋಸ್‌ xp ಕಾವ್ಯ ದೊಂದಿಗೆ ಸತ್ತು ಹೋಯಿತು . ಆದರೆ ಕನ್ನಡದ ಬರವಣಿಗೆಗೇನು ಮಾಡುವುದೆಂದು ತಲೆಕೆಡಿಸಿಕೊಳ್ಳಬೇಕಾಯಿತು . ಭಾರತ ಸರ್ಕಾರ ಸ್ವಾಮ್ಯದ ( ಸಿ – ಡ್ಯಾಕ್‌ ಅಭಿವೃದ್ಧಿ ಪಡಿಸಿರುವ ) ಲಿನಕ್ಸ್‌ ಕಾವ್ಯದ ಅರಿವಿದ್ದುದರಿಂದ ಬಾಸ್‌ 4. ೦ ( ಭಾರತೀಯ ಆಪರೇಟಿಂಗ್‌ ಸಿಸ್ಟಂ ಅಂಡ್‌ ಸಲ್ಯೂಷನ್ಸ್‌ ) ನ್ನೂ ಸಹ ಗಣಕದಲ್ಲಳವಡಿಸಲಾಯಿತು . ಬಾಸ್‌ 4 ರಲ್ಲಿ ಎಸ