ಹುಟ್ಟು ಹೋರಾಟಗಾರ ಶ್ರೀ ಎಂ.ಚಂದ್ರಶೇಖರಯ್ಯ
ಹುಟ್ಟು ಹೋರಾಟಗಾರ ಶ್ರೀ ಎಂ.ಚಂದ್ರಶೇಖರಯ್ಯ ಊರಿಂದಲ/ಊರಹಿಂದಲ ಮಲ್ಲೇಗೌಡ ಕುಟುಂಬ ಶ್ರೀ ಎಂ . ಚಂದ್ರಶೇಖರಯ್ಯ , ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಹೊಸಹಳ್ಳಿಯ ಊರಿಂದಲ ( ಊರಹಿಂದಲ ) ಮಲ್ಲೇಗೌಡರ ಹಿರಿಯ ಮಗ , ಅವರ ತಾತನ ಹೆಸರೂ ಮಲ್ಲೇಗೌಡ ... ಎಂದೇ . ' ಊರಹಿಂದಲ ' ಎಂಬುದಕ್ಕೆ ಕಾರಣ ..! ಊರಿನ ದೊಡ್ಡಮನೆಯ ಮುಂಬಾಗಿಲು ಪೂರ್ವಕ್ಕೆ ಇದ್ದು ಆಮನೆಯ ಹಿಂಭಾಗಕ್ಕೆ ಇದ್ದುದರಿಂದಲೋ ಅಥವಾ ಊರಿನಲ್ಲಿನ ದೇವಸ್ಥಾನಗಳು ಆ ಮನೆಯ ಪೂರ್ವಕ್ಕೆ ಇದ್ದುದರಿಂದಲೋ ಏನೋ ಇರಬೇಕು , ಇಲ್ಲವೆ ಅವರ ಮನೆ ಪಶ್ಚಿಮದಲ್ಲಿ ಒಂಟಿಯಾಗಿದ್ದುದರಿಂದಲೋ ಏನೋ ಇರಬೇಕು ..? ಒಟ್ಟಿನಲ್ಲಿ ' ಊರಿಂದಲ / ಊರಹಿಂದಲ ' ಎಂಬ ವಿಶೇಷಣ ಅವರ ಕುಟುಂಬಕ್ಕೆ ಅಂಟಿಕೊಂಡಿತ್ತು . ಮನೆಯಲ್ಲಿ ಬೆಳ್ಳಿಬಂಗಾರ ದವಸ - ಧಾನ್ಯ ತುಂಬಿ ತುಳುಕಾಡುತ್ತಿದ್ದುದೆಂದೇ ಹೇಳಬೇಕು . ಆ ಮಟ್ಟಿಗೆ ಅವರು ನಮ್ಮೂರಿನಲ್ಲಿ ಶ್ರೀಮಂತರೇ ಆಗಿದ್ದರು , ಮನೆಯ ಮುಂದೊಂದು ಬ್ರಿಟಿಷರ ಕಾಲದ ಕಪ್ಪುಕಾರೊಂದು ನಿಂತಿರುತ್ತಿತ್ತು ... ಬಾಕಿ ಮಂದಿ ನೀರಾವರಿ ಜಮೀನುಗಳಲ್ಲಿ ಕಪಿಲೆ ಹೊಡೆದು ಬಾವಿಗಳಿಂದ ನೀರೆತ್ತುತ್ತಿದ್ದರೆ ಇವರ ನೀರಾವರಿ ಬಾವಿಗೆ ಅಳವಡಿಸಿದ್ದ ಜರ್ಮನಿಯಲ್ಲಿ ತಯಾರಾಗಿದ್ದ