Posts

Showing posts from 2025

"ಕನ್ನಡ, ತಮಿಳುವಿನಿಂದ ಹುಟ್ಟಿದ ಭಾಷೆ" ಒಂದು ವಿವಾದಾತ್ಮಕ ಹೇಳಿಕೆ, ಆಕ್ರೋಶ… ಕ್ಷಮಾಪಣೆಯ ಬೆಂಬತ್ತಿ…

  "ಕನ್ನಡ, ತಮಿಳುವಿನಿಂದ ಹುಟ್ಟಿದ ಭಾಷೆ" ಒಂದು ವಿವಾದಾತ್ಮಕ ಹೇಳಿಕೆ, ಆಕ್ರೋಶ… ಕ್ಷಮಾಪಣೆಯ ಬೆಂಬತ್ತಿ… ಬಹು ಭಾಷಾ ನಟ ಕಮಲ ಹಾಸನ್ ಇತ್ತೀಚೆಗೆ ಸಮಾರಂಭವೊಂದರಲ್ಲಿ ಕನ್ನಡವು ತಮಿಳಿನ ಮರಿಭಾಷೆಯೆಂದು ರಾಜಾರೋಷವಾಗಿ ಹೇಳಿ ಕೆಲವರಿಂದ ಅಂದರೆ ತಮಿಳು ಪ್ರೇಮಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರಿದು ಕನ್ನಡಿಗರ ಆಕ್ರೋಶ ಕೆರಳಿಸಿತು. ಸಮಯ ದಿನ ಗೊತ್ತಿಲ್ಲ … ಬೆಂಗಳೂರಿನಲ್ಲಿ ಅವರ ಸಿನೆಮ “Thug Life/ಥಗ್‌ ಲೈಫ್‌/ತಗ್‌ ಲೈಪ್‌" ಬಿಡುಗಡೆಗಾಗಿ ಅದರ ಪ್ರಚಾರದ ಸಮಯದಲ್ಲಿ ಈ ಹೇಳಿಕೆ ನೀಡಿದ್ದರು. ಆ ಸಮಾರಂಭದಲ್ಲಿ ಕನ್ನಡದ ನಟ ಶ್ರೀಯತ ಶಿವರಾಜಕುಮಾರ‍್ರವರೂ ಇದ್ದರು. ಕಾರಣ ಆ ಚಲಚಿತ್ರದಲ್ಲಿ ಅವರೂ ಸಹ ನಟಿಸಿರುತ್ತಾರೆ. ಕನ್ನಡದಲ್ಲಿಯೇ ಹೇಳಬೇಕೆಂದರೆ ಕಮಲ ಹಾಸನ್‌ ರವರ ಭಾಷಣದ ಸಾರಾಂಶ "ಕನ್ನಡ ಭಾಷೆಯ ತಂದೆ ತಮಿಳು ಭಾಷೆ, ಕನ್ನಡದ ಅಪ್ಪ ತಮಿಳು" ಎಂಬುದೇ ಆಗಿತ್ತು. ಈ ಮಾತು ಕನ್ನಡಿಗರಿಗೆ ಎಲ್ಲಿಲ್ಲದ ಕೋಪ ತರಿಸಿದೆ. ಇದೀಗ ಕನ್ನಡಿಗರು ಕಮಲ ಹಾಸನ್‌ ಅವರಿಂದ ಈ ರೀತಿಯ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮಾಪಣೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಲ್ಲವಾದಲ್ಲಿ ಅವರ ಚಲಚಿತ್ರ “Thug Life /ಥಗ್‌ ಲೈಫ್‌/ತಗ್‌ ಲೈಪ್‌" ಅನ್ನು ಕರ‍್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ಇಲ್ಲ!.. ಕನ್ನಡ ಹಿತರಕ್ಷಣಾ ಸಮಿತಿಯಿಂದ ಆಧ್ಯಾದೇಶವಾಗಿದೆ. ಈ ಕ್ರಮಕ್ಕೆ ಕನ್ನಡಿಗರು ಒಕ್ಕೊರಲಿನ ದ್ವನಿಗೂಡಿಸಿದ್ದಾರೆ. ಶ್ರೀ...

ಕ್ರಿಕೆಟ್‌, ಬ್ರಿಟಿಷ್‌ ವಸಾಹತುವಿನ ಭಾರತದ ಜಂಟಲ್ಮನ್‌ ಗುಲಾಮೀ ಆಟಗಳಲ್ಲೊಂದು

Gladiator II ಚಲಚಿತ್ರದ ದುಷ್ಟ ಶಕುನಿ(Macrinus) ಉವಾಚ: “The greatest Temple Rome ever built!? The Colosseum”. ಅಲ್ಲಿ Colosseumನಲ್ಲಿ… ರೋಮ್ನ ಸಾರ‍್ವಜನಿಕರು ವೀಕ್ಷಿಸಿ ಗ್ಲಾಡಿಯೇಟರ್ಗಳ ಸಾವಿನ ಆಟ ನೋಡಿ ಖುಶಿ ಪಟ್ಟು ಸಂತೋಷಡುತ್ತಿದ್ದರು. ಹಾಗೆ ಇಲ್ಲಿ ಭಾರತದಲ್ಲಿ ಕ್ರಿಕೆಟ್‌ ಕ್ರೀಡಾಂಗಣಗಳು ಕೊಲೊಸಿಯಂಗಳಾಗಿವೆ. ಇಲ್ಲಿ ಯಾವನೋ ಒಬ್ಬ IPLನ ಧನವುಳ್ಳ ಶ್ರೀಮಂತ ಕೊಂಡುಕೊಂಡ ಕ್ರಿಕೆಟ್‌ ಗ್ಲಾಡಿಯೇಟರ‍್ಗಳು ಪಣದಲ್ಲಿರುತ್ತಾರೆ, ಈ ಪಣಕ್ಕೊಡ್ಡಿದ ಗ್ಲಾಡಿಯೇಟರ‍್ಗಳ ಬೆನ್ನುಬೀಳುವ ಹಿಂಬಾಲಕ ಭಾರತೀಯ ಮೂರ್ಖರು ಅವರ ಗೆಲುವುಸೋಲಿನ ಆಟನೋಡಿ ಖುಶಿ ಪಡುತ್ತಾರೆ ಇಲ್ಲವೆ ಎಲ್ಲಾ ಕಳೆದುಕೊಂಡಂತೆ ಜೋಲುಮುಖ ಹಾಕಿಕೊಳ್ಳುತ್ತಾರೆ. ಹಾಗಾಗಿ… "ಕ್ರಿಕೆಟ್‌, ಭಾರತದ ಗುಲಾಮೀ ಆಟಗಳಲ್ಲೊಂದು....” ಒಂದು ಕಾಲದಲ್ಲಿ ಕ್ರಿಕೆಟ್‌ ಅದು ಸಂಘ(ಅಸೋಷಿಯೇಶನ್‌)/ಕ್ಲಬ್‌ ಗಳೆಂಬ ಸದಸ್ಯರನ್ನೊಳಗೊಂಡ ಸಂಸ್ಥೆಗಳು ಒಂದರ ವಿರುದ್ಧ ಒಂದು ಆಟವಾಡುವ ಮೂಲಕ ಆಡುತ್ತಿದ್ದ ಆಟ. ಪ್ರಶ್ನೆ? ಭಾರತೀಯರೇಕೆ ಈ ಕ್ರಿಕೆಟ್‌ ಆಡುವುದನ್ನು ಕಲಿತರು? ಇದಕ್ಕೆ ಕಾರಣವಿದೆ… ಇದು ಬ್ರಿಟಿಷ್‌ ವಸಾಹತುವಿನ ಜಂಟಲ್ಮನ್ನರು ಆಡುತ್ತಿದ್ದ ಕ್ರೀಡೆ. ಬ್ರಿಟಿಷ್‌ ಗುಲಾಮಿತನದಲ್ಲಿದ್ದ ಭಾರತೀಯರು ತಾವುಗಳೂ ಸಹ ಆ ತರಹೆ ಜಂಟಲ್ಮನ್ನರುಗಳು ಆಗಬಹುದೆಂದು ಅಂದಿನ ಭಾರತೀಯ ಮೇಲ್ವರ್ಗದ ಜನ ಈ ಕ್ರೀಡೆಯನ್ನಾಡಲು ಪ್ರಾರಂಭಿಸಿದರು. ಸ್ವಾತಂತ್ರ್ಯ ಪೂರ್ವದಿಂದಲೂ ಈ ಅಟದ ವೀಕ್ಷಕ...

ಭಾರತ ದೇಶದ ಅತಿಮೂರ್ಖ ಸ್ವಾರ್ಥ ಸಾಧನೆಯ ನಾಯಕರು

  ಭಾರತ ದೇಶದ ಅತಿಮೂರ್ಖ ಸ್ವಾರ್ಥ ಸಾಧನೆಯ ನಾಯಕರು   ಭಾರತ ದೇಶದ ಅತಿಮೂರ್ಖ ಸ್ವಾರ್ಥ ದೇಶದ್ರೋಹಿ ನಾಯಕರು ತಮಿಳರಲ್ಲದ ಯಾರೇ ಆಗಲಿ ಅವರು ಚೆನ್ನೈ ನಗರದ ಕೇಂದ್ರ ಸ್ಥಳ ' ಎಗ್ಮೋರ ' ದ ಸುತ್ತಮುತ್ತಲಿನ ಪಾದಚಾರಿ ರಸ್ತೆಗಳಲ್ಲಿ ಸುತ್ತಾಡಿದರೆ , ಅಥವಾ ಮೋರ್‌ ಮಾರುಕಟ್ಟೆಯಲ್ಲಿ ಸುತ್ತಾಡಿದರೆ ಅವರಿಗೊಂದು ಅನುಭವವಾಗುತ್ತದೆ . ಅಲ್ಲಿನ ಒಳಗಿನ ಮತ್ತು ಹೊರಗಿನ ಪಾದಚಾರಿ ದಾರಿಗಳಲ್ಲಿ ವಿಧ್ಯುನ್ಮಾನ ವಸ್ತುಗಳನ್ನು ಮಾರುವ ಹುಡುಗರು ಅವರ ಗಿರಾಕಿಗಳ ಬಳಿ ನಾಲ್ಕೈದು ಭಾಷೆಗಳಲ್ಲಿ ಮಾತನಾಡುತ್ತಾ ವ್ಯವಹರಿಸುತ್ತಿರುತ್ತಾರೆ… ತಮಿಳು , ಹಿಂದಿ , ತೆಲುಗು , ಮಲಯಾಳಂ ಮತ್ತೆ ಕೊನೆಗೆ ಇಂಗ್ಲಿಶಿನಲ್ಲಿ ಅವರ ಸಂಭಾಷಣೆಯಿರುತ್ತದೆ . ಈ ನಾಲ್ಕೈದು ಭಾಷೆಗಳಲ್ಲಿ ನಿರರ‍್ಗಳವಾಗಿ ಮಾತನಾಡುವ ಈ ಬೀದಿ ಬದಿಯ ವ್ಯಾಪಾರಿ ಹುಡುಗರು ಅವರ ನಾಡಿನ ಸಂಕುಚಿತ ಮನೋಭಾವದ ಮುಖ್ಯಮಂತ್ರಿ ಸ್ಟಾಲಿನ್‌ ವಿರುದ್ಧ ಭಾಷೆಯ ವಿಷಯವಾಗಿ ಎದರು ಮಾತನಾಡುವುದಿಲ್ಲವೇಕೆ ? ಎಂಬುದೊಂದು ಪ್ರಶ್ನೆ ? ಅವರು ಕಲಿತಿರುವ ಆ ಭಾಷೆಗಳು ಅವರ ಹೊಟ್ಟೆ ಹೊರೆಯುತ್ತವೆ . ಅವುಗಳವರ ದಿನದ ದುಡಿಮೆಯ ಮಾರ‍್ಗವಾಗಿವೆ ?! ಇದನ್ನು ಚೆನ್ನಾಗಿ ಅರಿಯಬೇಕು ನಮ್ಮನ್ನು ಆಳುವ ಮಂದಿ… ಅಂದರೆ ಮುಖ್ಯಮಂತ್ರಿ ಮತ್ತವನ ಸಹಚರ ಮಂತ್ರಿಗಳು . ಈ ವಿಷಯವನ್ನು ಯಾಕೆ ಹೇಳುತ್ತಿದ್ದೀನೆಂದರೆ ಯುವಕರು ಚಿಕ್ಕ ವಯಸ್ಸಿನಲ್ಲಿಯೇ ಕಲಿಯುವ ಬಹುಭಾಷೆಗಳು ಸುತ್ತಮುತ್ತಲಿನ ಯಾವುದೇ ರಾಜ್ಯದಲ್ಲಿ ಬೇಗನೆ ತಮಗೊಂದು ...